ಗುರುವಾರ, ಏಪ್ರಿಲ್ 29, 2010

ದಂತಕತೆ

ಮನೆಬಿಟ್ಟು ಹೋದ ಗುಬ್ಬಚ್ಚಿಯ ಚುಂಚಿನಂತಿದ್ದರೂ
ಅರಳಲು ನಾಚುತ್ತಿರುವ ಮಲ್ಲಿಗೆಯಂತಿದ್ದರೂ
ದೇವರ ಅದ್ಭುತ ನವ್ಯಕಲೆಯಂತಿದ್ದರೂ
ಕಡೆದು ಕೊರೆದು ಗೋಡೆಕಟ್ಟುವರಲ್ಲ;
ವಕ್ರತೆಯೇ ಸೌಂದರ್ಯವೆಂದು ಈ
ದಂತವೈದ್ಯರಿಗೆ ತಿಳಿಯುವುದಾದರೂ ಎಂದು?

ಕಾಮೆಂಟ್‌ಗಳಿಲ್ಲ: