ಶುಕ್ರವಾರ, ಮೇ 5, 2017

ದಶಾವತಾರ



ಬಡ ಭಿಕ್ಷುಕನೊಬ್ಬ
ಒಣ ರೊಟ್ಟಿಯಲಿ
ಕಂಡಮೃತವ

ದಾರಿಹೋಕನು
ಮರದನೆಳಲಲಿ
ಕಂಡಮರಾವತಿಯ

ಹಸುಕಂದನು
ತಾಯ ಮಡಿಲಲಿ
ಕಂಡ ವೈಭವವ

ಬಡತನದ ಬೇಗೆಯಲಿ
ದುಡಿಮೆಫಲದ
ಸವಿಯ

ಒಂಟಿ ಕಾಲನ
ಶೂಲದಿ ಅವಳ
ಮುಗುಳುನಗೆ ಬೆಳಕ

ಅರಿಯಲಾದರೂ
ಅನುಭವಿಸಲಾದರೂ
ಅವತರಿಸಲೇಬೇಕಾಯ್ತು
ಅವನಿಯಲವಗೆ

ಕಾಮೆಂಟ್‌ಗಳಿಲ್ಲ: