ಗುರುವಾರ, ಡಿಸೆಂಬರ್ 26, 2013
ಗುರುವಾರ, ಡಿಸೆಂಬರ್ 12, 2013
ನೊಗದ ನೆಲೆ
ಬೆವರಾಗಿ ರಕ್ತ
ಸಾವಿರದ ಅನ್ನ
ಮುಡಿಪಾದ ತನ್ನತನ
ದಿನವೂ
ಬದುಕುವ ಸಾವೆಂಬ ಆಟ
ಸಾಯುವ ನೋವಿನೋಟ
ಬೆಳೆ ಕಳೆಗಳ
ಮಧ್ಯೆ
ನೊಗದ ಸಾಗಾಟ
ತಪದಿ ಗಳಿಸಿದ
ಅಗುಳು
ಗಂಟಲಿಳಿಯದಷ್ಟು ಋಣ
ಬೆಳಕಾಗದಿದ್ದರೂ ಬೆಳೆಗೆ
ಕೊನೆಗೆ ಕೊಳೆತು
ಗೊಬ್ಬರವಾದರೂ
ಆಗಬೇಕು
ನೊಗದ ನೋವಿಗೆ
ಈಡಾಗಲೇ ಬೇಕು
http://www.youtube.com/watch?v=jj5RGLjF-tM
ಸಾವಿರದ ಅನ್ನ
ಮುಡಿಪಾದ ತನ್ನತನ
ದಿನವೂ
ಬದುಕುವ ಸಾವೆಂಬ ಆಟ
ಸಾಯುವ ನೋವಿನೋಟ
ಬೆಳೆ ಕಳೆಗಳ
ಮಧ್ಯೆ
ನೊಗದ ಸಾಗಾಟ
ತಪದಿ ಗಳಿಸಿದ
ಅಗುಳು
ಗಂಟಲಿಳಿಯದಷ್ಟು ಋಣ
ಬೆಳಕಾಗದಿದ್ದರೂ ಬೆಳೆಗೆ
ಕೊನೆಗೆ ಕೊಳೆತು
ಗೊಬ್ಬರವಾದರೂ
ಆಗಬೇಕು
ನೊಗದ ನೋವಿಗೆ
ಈಡಾಗಲೇ ಬೇಕು
ಶನಿವಾರ, ನವೆಂಬರ್ 16, 2013
ಬೆಳ್ಕೊಂದೈತೆ
ಏನಾಗೋದ್ರೂ ಬದ್ಕ್ಲೇಬೇಕು ಹುಟ್ಟಿದ್ದಕ್ಕೆ
ಕೈಯಲ್ಕಾಸು ಆಡ್ತಿರ್ಬೇಕು ಉಸ್ರಾಡೋಕೆ
ಭೂಮಿಲ್ಜನಾ ದಿನಾ ಸಾಯೋದ್ಕಾಸ್ಕಾಣೋಕೆ
ಬದ್ಕನ್ನೋದೇ ದಿನಾ ಚೂರ್ಚೂರ್ ಸಾಯೋದಕ್ಕೆ
ರಕ್ತಕರ್ಗಿ ಬೆವ್ರಾಗ್ ಹರ್ದ್ರೆ ರೋಗಾ ಇಲ್ಲ
ಹಂಚಿತಿನ್ನೋ ಮನ್ಸೂ ಇದ್ರೆ ಜೀವ್ನಾ ಬೆಲ್ಲ
ದಿನಾ ಸಿಹೀ ತಿಂದ್ರೆ ಏನೂ ತಿಳಿಯೋದಿಲ್ಲ
ಬೇವಲ್ ಹೂವಾದ್ಕಾಲಕ್ಕೆಸ್ರೆ ವಸಂತ್ಕಾಲ
ಸುತ್ತಲ್ಜನ್ರ ಕಣ್ಣಲ್ ನಮ್ನಮ್ ಮುಖದ್ಬೆಳ್ಕು
ಕಾಣೋದಕ್ಕೆ ಎದ್ಯೊಳ್ಗೆ ಬೆಳ್ಕಿರ್ಬೇಕು
ಕಾರಿರ್ಳೂಲೂ ಕಂಗಾಲಾಗ್ದಂಗ್ನಮ್ಮೊಳ್ಗೈತೆ
ಒಳ್ಗೆ ಇಳ್ದು ನೋಡ್ತಾ ಇದ್ರೆ ಮಾತಾಡ್ತೈತೆ.
ಬುಧವಾರ, ಸೆಪ್ಟೆಂಬರ್ 25, 2013
ಅದೇನಾಯಿತೆಂದರೆ,
http://mangalore.olx.in/the-bliss-iid-550481241
ಬೆಳಕು ಕತ್ತಲುಗಳ ನಡುವಿನ
ನೀರವ ಮೌನ
ಸಾಕಾಗಿ ನೀರು ಮಣ್ಣಿನ ಪಾನ
ಹೂವಾಗಿ ಅರಳಿತು
ಬಣ್ಣದ ಚಿಟ್ಟೆಯೊಂದು ಕೆರಳಿತು
ಹೂವಿನೊಳಗಿಳಿಯಿತು
ಇಳಿದ ಚಿಟ್ಟೆ ಸವಿಯಿತು
ಮೆಲ್ಲ ಮಾತನಾಡಿತು
ಹೂವಿನದೋ ದಿವ್ಯ ಮೌನ
ಬೆಳಕಿನದೇ ಧ್ಯಾನ
ಚಿಟ್ಟೆಯದೂ ಕಣ್ಣು ಹೊರಳಿತು
ಬೆಳಕು ಹೂವ ಕಂಡಿತು
ರೆಕ್ಕೆ ಹರಡಿತು
ಅತ್ತ ಹೊರಟಿತು
ಬಣ್ಣದ ರೆಕ್ಕೆ ಬೆಳಕಿನಲಿ
ಕರಗಿ ಬೆಳಗಿತು ಗಾಳಿಯಲಿ
ಮತ್ತೆ ನೀರಿನಲಿ
ಇತ್ತ ಹೂವಿನ ಧ್ಯಾನ ಬೀಜದಲಿ
ತಾನು ರೆಕ್ಕೆ ಬಿಚ್ಚುತ್ತಾ
ಚಿಟ್ಟೆ ಮೊಗ್ಗಾಗಿ
ಅರಳಿತು...
ಬೆಳಕು ಕತ್ತಲುಗಳ ನಡುವಿನ
ನೀರವ ಮೌನ
ಸಾಕಾಗಿ ನೀರು ಮಣ್ಣಿನ ಪಾನ
ಹೂವಾಗಿ ಅರಳಿತು
ಬಣ್ಣದ ಚಿಟ್ಟೆಯೊಂದು ಕೆರಳಿತು
ಹೂವಿನೊಳಗಿಳಿಯಿತು
ಇಳಿದ ಚಿಟ್ಟೆ ಸವಿಯಿತು
ಮೆಲ್ಲ ಮಾತನಾಡಿತು
ಹೂವಿನದೋ ದಿವ್ಯ ಮೌನ
ಬೆಳಕಿನದೇ ಧ್ಯಾನ
ಚಿಟ್ಟೆಯದೂ ಕಣ್ಣು ಹೊರಳಿತು
ಬೆಳಕು ಹೂವ ಕಂಡಿತು
ರೆಕ್ಕೆ ಹರಡಿತು
ಅತ್ತ ಹೊರಟಿತು
ಬಣ್ಣದ ರೆಕ್ಕೆ ಬೆಳಕಿನಲಿ
ಕರಗಿ ಬೆಳಗಿತು ಗಾಳಿಯಲಿ
ಮತ್ತೆ ನೀರಿನಲಿ
ಇತ್ತ ಹೂವಿನ ಧ್ಯಾನ ಬೀಜದಲಿ
ತಾನು ರೆಕ್ಕೆ ಬಿಚ್ಚುತ್ತಾ
ಚಿಟ್ಟೆ ಮೊಗ್ಗಾಗಿ
ಅರಳಿತು...
ಶನಿವಾರ, ಸೆಪ್ಟೆಂಬರ್ 14, 2013
ಶನಿವಾರ, ಜುಲೈ 6, 2013
ಶ್ರೇಷ್ಟ ಜೀವಿ!
ಹಸಿದಾಗ ಮಾತ್ರ ಬೇಟೆಗೆ ಹೊರಡುವ
ಕಾಡು ಪ್ರಾಣಿಗಳು ಕಡುಕ್ರೂರಿಗಳು
ತುತ್ತು ರೊಟ್ಟಿಗಾಗಿ ಮತ್ತು ಅಲ್ಪ ಮಿಥುನಕ್ಕಾಗಿ
ಕಚ್ಚಾಡುವ ನಾಯಿಗಳದೆಂಥಾ ನಾಯಿಬುದ್ಧಿ?
ಬೀಡಾಡಿ ಗೂಳಿಗಳಿಗೋ
ಕುಟುಂಬ ಯೋಜನೆಯ ಗಂಧಗಾಳಿಯೂ ಇದ್ದಂತಿಲ್ಲ
ಹುಟ್ಟಾ ಗಲೀಜಿನ ಹಂದಿಗಳನ್ನು
ರುಚಿಯಿಂದ ಮಾತ್ರ ಮೆಚ್ಚಬಹುದು
ಅಷ್ಟೊಂದು ಅಕ್ಕರೆಯಿಂದ ಸಾಕಿದ ಕೋಳಿಗಳನ್ನು
ಮೋಸದಿಂದ ಕದ್ದೊಯ್ದು ಬಿರಿಯಾನಿ ಮಾಡದೇ ತಿನ್ನುವ
ನರಿಗಳದು ಠಕ್ಕು ಜೀವನ
ಚುನಾವಣೆಯೇ ಬೇಕಿಲ್ಲದೆ ಪ್ರಚಾರಕ್ಕೆ ಹೊರಡುವ ಕಾಗೆಗಳು
ಬಲು ಕರ್ಕಶ
ಕೈಕಾಲಿದ್ದು ಕಾಡನ್ನು ಕಡಿದು ವನಮಹೋತ್ಸವ
ಮಾಡದ ನಿಷ್ಪ್ರಯೋಜಕ ಜೀವಿಗಳಿಗೆ ಮಂಗಗಳೆಂದು ಕರೆಯಬಹುದು
ಗಂಗೆಯಂತಾ ನದಿಗಳ ನೀರಲ್ಲಿದ್ದೂ ಬದುಕಿ ಉಳಿದ ಮೀನುಗಳಿದ್ದರೆ
ನಮ್ಮ ಹೊಟ್ಟೆಯಲ್ಲಾದರೂ ಸಾಯಲಿ!
ಪ್ರಪಂಚವನ್ನು ಇದ್ದಂತೆ ಇರಬಿಟ್ಟು ತಾನು
ಬಣ್ಣ ಬದಲಿಸುವ ಜೀವೆಯೆ ಗೋಸುಂಬೆ!
ಮನುಷ್ಯನೋ ಇವುಗಳನ್ನೆಲ್ಲ ಮೀರಿದ ಶ್ರೇಷ್ಟ ಜೀವಿ!
ಕಾಡು ಪ್ರಾಣಿಗಳು ಕಡುಕ್ರೂರಿಗಳು
ತುತ್ತು ರೊಟ್ಟಿಗಾಗಿ ಮತ್ತು ಅಲ್ಪ ಮಿಥುನಕ್ಕಾಗಿ
ಕಚ್ಚಾಡುವ ನಾಯಿಗಳದೆಂಥಾ ನಾಯಿಬುದ್ಧಿ?
ಬೀಡಾಡಿ ಗೂಳಿಗಳಿಗೋ
ಕುಟುಂಬ ಯೋಜನೆಯ ಗಂಧಗಾಳಿಯೂ ಇದ್ದಂತಿಲ್ಲ
ಹುಟ್ಟಾ ಗಲೀಜಿನ ಹಂದಿಗಳನ್ನು
ರುಚಿಯಿಂದ ಮಾತ್ರ ಮೆಚ್ಚಬಹುದು
ಅಷ್ಟೊಂದು ಅಕ್ಕರೆಯಿಂದ ಸಾಕಿದ ಕೋಳಿಗಳನ್ನು
ಮೋಸದಿಂದ ಕದ್ದೊಯ್ದು ಬಿರಿಯಾನಿ ಮಾಡದೇ ತಿನ್ನುವ
ನರಿಗಳದು ಠಕ್ಕು ಜೀವನ
ಚುನಾವಣೆಯೇ ಬೇಕಿಲ್ಲದೆ ಪ್ರಚಾರಕ್ಕೆ ಹೊರಡುವ ಕಾಗೆಗಳು
ಬಲು ಕರ್ಕಶ
ಕೈಕಾಲಿದ್ದು ಕಾಡನ್ನು ಕಡಿದು ವನಮಹೋತ್ಸವ
ಮಾಡದ ನಿಷ್ಪ್ರಯೋಜಕ ಜೀವಿಗಳಿಗೆ ಮಂಗಗಳೆಂದು ಕರೆಯಬಹುದು
ಗಂಗೆಯಂತಾ ನದಿಗಳ ನೀರಲ್ಲಿದ್ದೂ ಬದುಕಿ ಉಳಿದ ಮೀನುಗಳಿದ್ದರೆ
ನಮ್ಮ ಹೊಟ್ಟೆಯಲ್ಲಾದರೂ ಸಾಯಲಿ!
ಪ್ರಪಂಚವನ್ನು ಇದ್ದಂತೆ ಇರಬಿಟ್ಟು ತಾನು
ಬಣ್ಣ ಬದಲಿಸುವ ಜೀವೆಯೆ ಗೋಸುಂಬೆ!
ಮನುಷ್ಯನೋ ಇವುಗಳನ್ನೆಲ್ಲ ಮೀರಿದ ಶ್ರೇಷ್ಟ ಜೀವಿ!
ಗುರುವಾರ, ಜೂನ್ 13, 2013
ಇರುವೆ -ಇರವು- ಅರಿವೆ- ಅರಿವು
ನನ್ನ ಇರವಿಗೂ
ಈ ಇರುವೆಯ ಇರವಿಗೂ
ಇರುವ ವ್ಯತ್ಯಾಸವೆಂದರೆ,
ನನಗೆ ನನ್ನ ಅರಿವಿಲ್ಲ,
ಇರುವೆಗೆ ಅದರ ಪರಿವಿಲ್ಲ
ನನ್ನ ಪ್ರಪಂಚ
ನನ್ನ ಪರಿಧಿಯದ್ದೆ
ಪರಿಧಿ ಅರಿವಿನದ್ದೆ
ಆದರೆ ನನ್ನರಿವಿಗೇ ಪರಿಯಿಲ್ಲ
ಅರಿಯದಿದ್ದುದಕ್ಕೆ ಪಾರವಿಲ್ಲ
ಬರಿದೆ ಇರುವಿನ ಕುರಿತು
ಇರುಳಿಡೀ ಕೊರೆದುಕೊಂಡು
ಮಲಗಿ ಏಳುವ ಮೊದಲೇ
ಇರುವೆಯ ಹುತ್ತ ನನ್ನನ್ನೂ ಮೀರಿ
ಮೇಲೆದ್ದಿದೆ!
ನಾನೂ ಇರುವೆ!
ಇಲ್ಲಿಯೆ!
ನನ್ನ ಪರಿಧಿಯಲ್ಲಿಯೆ!
ಈ ಇರುವೆಯ ಇರವಿಗೂ
ಇರುವ ವ್ಯತ್ಯಾಸವೆಂದರೆ,
ನನಗೆ ನನ್ನ ಅರಿವಿಲ್ಲ,
ಇರುವೆಗೆ ಅದರ ಪರಿವಿಲ್ಲ
ನನ್ನ ಪ್ರಪಂಚ
ನನ್ನ ಪರಿಧಿಯದ್ದೆ
ಪರಿಧಿ ಅರಿವಿನದ್ದೆ
ಆದರೆ ನನ್ನರಿವಿಗೇ ಪರಿಯಿಲ್ಲ
ಅರಿಯದಿದ್ದುದಕ್ಕೆ ಪಾರವಿಲ್ಲ
ಬರಿದೆ ಇರುವಿನ ಕುರಿತು
ಇರುಳಿಡೀ ಕೊರೆದುಕೊಂಡು
ಮಲಗಿ ಏಳುವ ಮೊದಲೇ
ಇರುವೆಯ ಹುತ್ತ ನನ್ನನ್ನೂ ಮೀರಿ
ಮೇಲೆದ್ದಿದೆ!
ನಾನೂ ಇರುವೆ!
ಇಲ್ಲಿಯೆ!
ನನ್ನ ಪರಿಧಿಯಲ್ಲಿಯೆ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)